ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ(DFO) ಶ್ರೀ ಶಿವಶಂಕರ್ ಅವರ ಭೇಟಿ
S
Sankusha
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರ ನೇತೃತ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ(DFO) ಶ್ರೀ ಶಿವಶಂಕರ್ ಅವರನ್ನು ಭೇಟಿ ಮಾಡಿ ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ರಾಮಸ್ವಾಮಿ ಶೆಟ್ಟಿಗದ್ದೆ ಅವರು, ನಾಮ ನಾಗೇಶ್ ಅವರು, ವಕೀಲರಾದ ಸಂತೋಷ್ ಸೇರಿದಂತೆ ಒಕ್ಕೂಟದ ಹಲವು ಸದಸ್ಯರು ಉಪಸ್ಥಿತರಿದ್ದರು.
ಚರ್ಚಿಸಲಾದ ಪ್ರಮುಖ ವಿಷಯಗಳು :
- ಈಗಾಗಲೇ ರಚನೆಯಾಗಿರುವ SIT (ಎಸ್ಐಟಿ) ಕುರಿತು ಚರ್ಚೆ ನಡೆಸಲಾಗಿದ್ದು, DFO ರವರು ಇದರ ಉದ್ದೇಶ, ಕಾನೂನು ತೊಡಕುಗಳು ಹಾಗೂ ಲಭ್ಯವಿರುವ ಮಾಹಿತಿಯನ್ನು ವಿವರಿಸಿದರು.
- 1978ರ ಹಿಂದೆಯೇ ಮಂಜೂರಾದ ಜಮೀನಿನ ಸಮಸ್ಯೆಗಳ ಕುರಿತು ಸಹ ಚರ್ಚೆ ನಡೆಯಿತು.
- ಡೀಮ್ಡ್ ಫಾರೆಸ್ಟ್ ವಿಷಯದಲ್ಲಿ ಚರ್ಚಿಸಿದಾಗ ಯಾವ ಯಾವ ಮಾನದಂಡಗಳ ಆಧಾರದ ಮೇಲೆ ಡೀಮ್ಡ್ ಫಾರೆಸ್ಟ್ ನಿರ್ಧರಿಸಲಾಗುತ್ತದೆ ಎಂಬುದನ್ನು DFO ರವರು ವಿವರಿಸಿದರು ಹಾಗೂ ಈಗಾಗಲೇ ಡ್ರೋನ್ ಸರ್ವೆ ನಡೆಸಿ ಸುಮಾರು 7 ಸಾವಿರ ಎಕರೆಗಳನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಕೈಬಿಡಲಾಗಿರುವ ಬಗ್ಗೆ ಮಾಹಿತಿ ನೀಡಿದರು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ರೈತ ಒಕ್ಕೂಟಕ್ಕೆ ಭರವಸೆಯನ್ನು ನೀಡಿದರು.
- 4/1 ನೋಟಿಫಿಕೇಶನ್ ಕುರಿತು ವಿವರವಾಗಿ ಚರ್ಚಿಸಲಾಯಿತು.
- ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ FSO ಅವರ ಕಚೇರಿಯನ್ನು ಕೊಪ್ಪದಲ್ಲಿ ಪ್ರಾರಂಭಿಸುವ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಪ್ರಸ್ತುತ FSO ಕಡೂರು ಅವರ ಅಧಿಕಾರಾವಧಿ ಮುಗಿದಿದ್ದು, ಶೀಘ್ರದಲ್ಲೇ ಹೊಸ ಅಧಿಕಾರಿಯನ್ನು ನೇಮಕ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂಬ ಮಾಹಿತಿಯನ್ನು ನೀಡಿದರು.
Gallery
S
Sankusha
Author at ರೈತ ಒಕ್ಕೂಟ. Passionate about technology and innovation.