ನಮ್ಮ ಬಗ್ಗೆ
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ
ನಮ್ಮ ಪರಿಚಯ
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟವು ಶೃಂಗೇರಿ ಕ್ಷೇತ್ರದ ರೈತರ ಹಕ್ಕು, ಭೂಮಿ, ಜೀವನೋಪಾಯ ಮತ್ತು ಗೌರವಯುತ ಬದುಕಿನ ರಕ್ಷಣೆಗೆ ಸ್ಥಾಪನೆಯಾದ ಒಂದು ಸ್ವತಂತ್ರ ಹಾಗೂ ಸಮರ್ಪಿತ ರೈತ ಸಂಘಟನೆ. ರೈತರು ದಿನನಿತ್ಯ ಎದುರಿಸುವ ಸಮಸ್ಯೆಗಳ ಕುರಿತು ಸ್ಪಷ್ಟ ಮಾಹಿತಿ, ಅರಿವು ಮತ್ತು ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ.
ನೀರಾವರಿ ಉದ್ದೇಶಕ್ಕಾಗಿ ಭದ್ರಾ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ತಮ್ಮ ನೆಲೆ ಮತ್ತು ಜಮೀನನ್ನು ತ್ಯಜಿಸಿದ ಭದ್ರಾ ಸಂತ್ರಸ್ಥರು ಹಲವು ದಶಕಗಳಿಂದ ಪರ್ಯಾಯ ಜಮೀನಿಗಾಗಿ ಮತ್ತು ನ್ಯಾಯಸಮ್ಮತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಸಂತ್ರಸ್ಥರ ಹೋರಾಟಕ್ಕೆ ಬೆಂಬಲವಾಗಿ ನಿಂತು, ಅವರಿಗೆ ಮಾಹಿತಿ ಒದಗಿಸುವುದು, ಸಂಘಟಿತ ಚರ್ಚೆಗಳನ್ನು ನಡೆಸುವುದು ಹಾಗೂ ಕಾನೂನು ಮಾರ್ಗದರ್ಶನ ನೀಡುವುದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ.
ಇಂದಿನ ದಿನಗಳಲ್ಲಿ ಅನೇಕ ರೈತರು ಭೂಮಿ ಸಂಬಂಧಿತ ಸಮಸ್ಯೆಗಳು, ದಾಖಲೆಗಳ ಗೊಂದಲ ಮತ್ತು ಕಾನೂನು ಅರಿವಿನ ಕೊರತೆಯಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂತಹ ರೈತರಿಗೆ ಸರಳ ಮತ್ತು ಅರ್ಥವಾಗುವ ಭಾಷೆಯಲ್ಲಿ ಕಾನೂನು ಮಾಹಿತಿ ನೀಡುವುದು, ತಜ್ಞರಿಂದ ಉಚಿತ ಸಲಹೆ ಒದಗಿಸುವುದು ಹಾಗೂ ಅಗತ್ಯವಿದ್ದಲ್ಲಿ ಉಚಿತ ವಕಾಲತ್ತು ಸೇವೆಗೆ ದಾರಿ ತೋರಿಸುವುದು ನಮ್ಮ ಒಕ್ಕೂಟದ ಪ್ರಮುಖ ಸೇವೆಗಳಾಗಿವೆ.
ಶೃಂಗೇರಿ ಕ್ಷೇತ್ರದ ರೈತರ ಪ್ರಮುಖ ಜೀವನಾಧಾರವಾಗಿರುವ ಅಡಿಕೆ ಬೆಳೆ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಳದಿ ರೋಗ, ಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಗಳಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳ ಕುರಿತು ವೈಜ್ಞಾನಿಕ ಮತ್ತು ಪ್ರಾಯೋಗಿಕ ಮಾಹಿತಿ ನೀಡುವುದು, ಕೃಷಿ ತಜ್ಞರು ಹಾಗೂ ಅನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮಗಳು ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟವು ಯಾವುದೇ ಸರ್ಕಾರಿ ಸಂಸ್ಥೆಯನ್ನು ಪ್ರತಿನಿಧಿಸುವುದಿಲ್ಲ. ಇದು ಸಂಪೂರ್ಣವಾಗಿ ಮಾಹಿತಿ, ಅರಿವು ಮತ್ತು ರೈತರ ಒಗ್ಗಟ್ಟಿನ ಶಕ್ತಿಯನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುವ ಸ್ವತಂತ್ರ ವೇದಿಕೆಯಾಗಿದ್ದು, ರೈತರ ಬದುಕನ್ನು ಬಲಪಡಿಸುವತ್ತ ನಿರಂತರ ಪ್ರಯತ್ನ ನಡೆಸುತ್ತಿದೆ.
ವಿಷನ್ ಮತ್ತು ಮಿಷನ್
ರೈತನ ಹಕ್ಕಿಗೆ ಒಗ್ಗಟ್ಟಿನ ಹೋರಾಟ
ರೈತರ ಹಕ್ಕುಗಳ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ನಡೆಸುವ, ಭೂಮಿ ಹಾಗೂ ಜೀವನೋಪಾಯ ಸಂಬಂಧಿತ ಸಮಸ್ಯೆಗಳಿಗೆ ಕಾನೂನು ಮತ್ತು ತಜ್ಞರ ಸಹಕಾರ ಒದಗಿಸುವ, ಅಡಿಕೆ ಸೇರಿದಂತೆ ಪ್ರಮುಖ ಬೆಳೆಗಳ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ ರೈತನ ಬದುಕಿಗೆ ನಿರಂತರ ಬೆಂಬಲ ನೀಡುವ ಶಕ್ತಿಶಾಲಿ ರೈತ ಸಂಘಟನೆಯಾಗಿ ರೂಪುಗೊಳ್ಳುವುದು.
ನಮ್ಮ ರೈತ ಒಕ್ಕೂಟದ ಪದಾಧಿಕಾರಿಗಳು
ಕಾರ್ಬೈಲ್ ಮಂಜುನಾಥ್ ಗೌಡ
ಪ್ರಧಾನ ಕಾರ್ಯದರ್ಶಿ - ಕೊಪ್ಪ ತಾಲೂಕು
ಪ್ರದೀಪ್ ಕುಂಚೂರು
ಅಧ್ಯಕ್ಷರು - ಕಸಬಾ ಹೋಬಳಿ
ದಿವಾಕರ್ ಕಿಬಳಿ
ಉಪಾಧ್ಯಕ್ಷರು
ಸಂತೋಷ್ ಬಿಡಿಕೆ
ಅಧ್ಯಕ್ಷರು
ಪ್ರದೀಪ್ ಕಿಚ್ಚೆಬ್ಬಿ
ತಾಲ್ಲೂಕು ಅಧ್ಯಕ್ಷರು
ವಿಶ್ವನಾಥ್ ಗದ್ದೆಮನೆ
ಅಧ್ಯಕ್ಷರು - ಶೃಂಗೇರಿ ಕ್ಷೇತ್ರ
ಜಯಂತ್ ನಿಲುವಾಗಿಲು
ಉಪಾಧ್ಯಕ್ಷರು - ಕೊಪ್ಪ ತಾಲೂಕು
ಸತೀಶ್ ಮಣಬೂರು
ಉಪಾಧ್ಯಕ್ಷರು
ಸತೀಶ್ ಕೊಣಕೆರೆ
ಉಪಾಧ್ಯಕ್ಷರು
ಪ್ರಕಾಶ್ ಶೆಟ್ಟಿ ಎಲ್
ಕಾರ್ಯದರ್ಶಿ - ಕೊಪ್ಪ ತಾಲೂಕು
ಡಿ. ಸಿ. ಶಂಕರಪ್ಪ
ತಾಲೂಕು ಅಧ್ಯಕ್ಷರು - ಶೃಂಗೇರಿ ತಾಲೂಕು
ವಿವೇಕ್ ಬಾಳೆಹೊನ್ನೂರು
ಅಧ್ಯಕ್ಷರು
ರಾಮಸ್ವಾಮಿ ಶೆಟ್ಟಿಗದ್ದೆ
ಗೌರವಾಧ್ಯಕ್ಷರು - ಶೃಂಗೇರಿ ಕ್ಷೇತ್ರ
ಸುರೇಶ್ ಕೆರೆಮನೆ
ಉಪಾಧ್ಯಕ್ಷರು - ಕೊಪ್ಪ ತಾಲೂಕು
ಅರುಣ್ ಜೈನ್
ಉಪಾಧ್ಯಕ್ಷರು
ವಿನಯ್ ಕೊರಗೋಡು
ಪ್ರಧಾನ ಕಾರ್ಯದರ್ಶಿ - ಕಸಬಾ ಹೋಬಳಿ
ಗಿರೀಶ್ ಹೊಸಳ್ಳಿ
ಉಪಾಧ್ಯಕ್ಷರು
ನಾಗೇಶ್ ಎಂ ಎನ್
ಕಾರ್ಯಾದ್ಯಕ್ಷರು
ಮಂಜು ಶೆಟ್ಟಿ
ಉಪಾಧ್ಯಕ್ಷರು
ರಾಘವೇಂದ್ರ ಕೆಸವೆ
ಅಧ್ಯಕ್ಷರು - ಕೊಪ್ಪ ತಾಲೂಕು
ಚರಣ್ ಎಡಗೆರೆ
ಉಪಾಧ್ಯಕ್ಷರು
ರವಿ ಬಾಳಗಡಿ
ಉಪಾಧ್ಯಕ್ಷರು - ಕಸಬಾ ಹೋಬಳಿ
ಪ್ರದೀಪ್ ಯು,ಸಿ
ಉಪಾಧ್ಯಕ್ಷರು
ಮನೀಶ್
ಕಾರ್ಯದರ್ಶಿ
ಸಂತೋಷ್
ಕಾನೂನು ಸಲಹೆಗಾರರು
ಸುದನ್ವ ಬಿಕ್ಕರಣೆ
ಪ್ರಧಾನ ಕಾರ್ಯದರ್ಶಿ
ನವೀನ್ ಹೆನ್ನಂಗಿ
ಪ್ರಧಾನ ಕಾರ್ಯದರ್ಶಿ
ರಾಘವೇಂದ್ರ ಹಂಚಿನಮನೆ
ಪ್ರಧಾನ ಕಾರ್ಯದರ್ಶಿ
ದಿನೇಶ್ ಮುತ್ತುಗದಾನಿ
ಉಪಾಧ್ಯಕ್ಷರು - ಕಸಬಾ ಹೋಬಳಿ
ಸತೀಶ್ ಕಲ್ಮಕ್ಕಿ
ಉಪಾಧ್ಯಕ್ಷರು - ಕೊಪ್ಪ ತಾಲೂಕು
ಅಕ್ಷಯ್ ಬಿಗಡೆ
ಕಾರ್ಯದರ್ಶಿ
ರಾಕೇಶ್ ಹಿರೇಕೊಡಿಗೆ
ಕಾರ್ಯದರ್ಶಿ - ಕೊಪ್ಪ ತಾಲೂಕು
ವಿಜೇಂದ್ರ ಅಮ್ಮಡಿ
ಉಪಾಧ್ಯಕ್ಷರು - ಕಸಬಾ ಹೋಬಳಿ
ಸಂದೀಪ್ ಮಣಬೂರು
ಪ್ರಧಾನ ಕಾರ್ಯದರ್ಶಿ
ರಕ್ಷಿತ್ ಬಿಳಕೊಪ್ಪ
ಸಹ ಕಾರ್ಯದರ್ಶಿ
ಬಿಜು ಮೂಡಬಾಗಿಲು
ಪ್ರಧಾನ ಕಾರ್ಯದರ್ಶಿ
ಕಿಟ್ಟ ಚಿಟ್ಟಮಕ್ಕಿ
ಪ್ರಧಾನ ಕಾರ್ಯದರ್ಶಿ
ಸಚಿನ್ ಅಡುವಳ್ಳಿ
ಪ್ರಧಾನ ಕಾರ್ಯದರ್ಶಿ
ಸಂದೀಪ್ ಮೂಡಬಾಗಿಲು
ಪ್ರಧಾನ ಕಾರ್ಯದರ್ಶಿ
ಕುಮಾರ್ ಬಳಗಾರು
ಕಾರ್ಯದರ್ಶಿ- ಕಸಬಾ ಹೋಬಳಿ
ಸಿಂಚನ್ ಉಜ್ಜಯಿನಿ
ಸಂಚಾಲಕರು
ಸೇವಿ
ಪ್ರಧಾನ ಕಾರ್ಯದರ್ಶಿ
ಸಂದೇಶ್ ಕೂಳೂರು
ಕಾರ್ಯದರ್ಶಿ - ಕೊಪ್ಪ ತಾಲೂಕು
ಆಪ್ತ ಚೆನ್ನಮಣಿ
ಕಾರ್ಯದರ್ಶಿ
ರಾಜು ಆಡುವಳ್ಳಿ
ಪ್ರಧಾನ ಕಾರ್ಯದರ್ಶಿ
ಇತಿಹಾಸ ಹೊಸೂರು
ಕಾರ್ಯದರ್ಶಿ - ಕೊಪ್ಪ ತಾಲೂಕು
ಪ್ರತಾಪ್ ಅರಳಿಕೊಪ್ಪ
ಕಾರ್ಯದರ್ಶಿ
ಸತೀಶ್ ಗುಬ್ಬೂರು
ಪ್ರಧಾನ ಕಾರ್ಯದರ್ಶಿ
ಸುಧಾಕರ್ ವಾರ್ಕಟೆ
ಕಾರ್ಯದರ್ಶಿ
ಪ್ರವೀಶ್ ಕಬ್ಬಿನಮಣ್ಣು
ಕಾರ್ಯದರ್ಶಿ