ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ
R
Raitha Okkuta
ನರಸಿಂಹರಾಜಪುರ ಹಾಗೂ ಚಿಕ್ಕ ಅಗ್ರಹಾರದ ಅರಣ್ಯ ಇಲಾಖೆ ಕಛೇರಿಗಳಿಗೆ ಭೇಟಿ ನೀಡಿ ಆಯಾ ವಲಯಗಳ ವ್ಯಾಪ್ತಿಯಲ್ಲಿ ಆಗಿರುವ 4(1) ನೋಟಿಫಿಕೇಶನ್ಗಳು, ಡೀಮ್ಡ್ ಫಾರೆಸ್ಟ್ ಹಾಗೂ ಡಿಸಿ ರಿಸರ್ವ್ ಕಡತದ ಪ್ರತಿಗಳನ್ನು ದೃಢೀಕರಿಸಿ ಕೊಡುವಂತೆ ಶೃಂಗೇರಿ ಕ್ಷೇತ್ರ ಒಕ್ಕೂಟದ ವತಿಯಿಂದ ಅರಣ್ಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಾರ್ಯಾಧ್ಯಕ್ಷರಾದ ನಾಗೇಶ್ ಎಂ ಎನ್, ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಹಂಚಿನಮನೆ, ಕ್ಷೇತ್ರ ಸಂಚಾಲಕ ಪ್ರದೀಪ್ ನೀಲುವಾನಿ, ನರಸಿಂಹರಾಜಪುರ ತಾಲೂಕು ಸಂಚಾಲಕ ಅಶೋಕ್, ಕ್ಷೇತ್ರ ಕಚೇರಿ ಕಾರ್ಯದರ್ಶಿ ಸಚಿನ್ ಮೂಡುಬಾಗಿಲು ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಸೃಜನ್ ಕೆ ರವರು ಜೊತೆಗಿದ್ದರು.
Gallery
R
Raitha Okkuta
Author at ರೈತ ಒಕ್ಕೂಟ. Passionate about technology and innovation.