ಕಾಡಾನೆ ದಾಳಿಯಿಂದ ಮೃತರಾದ ಎಲಿಯಾಸ್ ಅವರ ಮನೆಗೆ ಶ್ರೀ ವಿಶ್ವನಾಥ್ ಗದ್ದೆಮನೆ ಭೇಟಿ

S
Sankusha
Feb 20, 2026 1 min read
ಕಾಡಾನೆ ದಾಳಿಯಿಂದ ಮೃತರಾದ ಎಲಿಯಾಸ್ ಅವರ ಮನೆಗೆ ಶ್ರೀ ವಿಶ್ವನಾಥ್ ಗದ್ದೆಮನೆ ಭೇಟಿ

ನರಸಿಂಹರಾಜಪುರ ತಾಲ್ಲೂಕಿನ ಮಡಬುರು ಗ್ರಾಮದ ಎಕ್ಕಡಬೈಲು ವಾಸಿಯಾಗಿದ್ದ ಎಲಿಯಾಸ್ ಅವರು ಆನೆ ದಾಳಿಯಿಂದ ಹತ್ಯೆಗೀಡಾಗಿದ್ದರು.

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರು ಮೃತರ ಮನೆಗೆ ಭೇಟಿ ನೀಡಿ ಅವರ ಪತ್ನಿ ಮೇರಿ ಮತ್ತು ಪುತ್ರ ವರ್ಗೀಸ್ ಅವರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ನಾಗೇಶ್ ಎಂ ಎನ್ ರವರು, ಅಭಿಷೇಕ್ ಹೊಸಳ್ಳಿ ರವರು, ಮಡಬುರು ಮತ್ತು ಶೆಟ್ಟಿಕೊಪ್ಪ ಗ್ರಾಮಸ್ಥರು ಉಪಸ್ಥಿತರಿದ್ದರು.

Share this article
S

Sankusha

Author at ರೈತ ಒಕ್ಕೂಟ. Passionate about technology and innovation.